ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ಮಾಧ್ಯಮಗಳಲ್ಲಿ > ಅರಣ್ಯದ ಉಳಿವಿಗಾಗಿ ಬಿಜೋತ್ಸವ

ಅರಣ್ಯದ ಉಳಿವಿಗಾಗಿ ಬಿಜೋತ್ಸವ

ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಹಾಗೂ ಶಿಕಾರಿಪುರ ವಲಯ ಅರಣ್ಯ ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ, ಅರಣ್ಯ ಇಲಾಖೆಯ ವಿನೂತನ ಕಾರ್ಯಕ್ರಮವಾದ ಬಿಜೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ ಬಿಜೋತ್ಸವ ಕಾರ್ಯಕ್ರಮದ ಆಶಯವನ್ನು ಮತ್ತು ಅರಣ್ಯ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ತಾರೆ ,ಹೊಂಗೆ, ಬಿದಿರು, ಕರಿಮತ್ತಿ , ಹೆಬ್ಬೇವು ಮರದ ಬೀಜಗಳನ್ನು ಬಿತ್ತಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಶಿವಕುಮಾರ್ ಜಿ ಎಸ್ ವಹಿಸಿದ್ದು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳು ಸಹ ಭಾಗವಹಿಸಿದ್ದವು.